Friday, October 26, 2012

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi
 
 
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ

ಬೆಣ್ಣೆ ಕದ್ದ ನಮ್ಮ ಕೃಷ್ಣ

Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".

ಬೆಣ್ಣೆ ಕದ್ದ ನಮ್ಮ ಕೃಷ್ಣ
ಸಾಹಿತ್ಯ - K S Nissar Ahmed
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - Chorus
 
 
ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ
ಬೆಣ್ಣೆ
ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮಬಿಂದಿಗೆ
ಬಿದ್ದು ಸಿಡಿಯಲು ಸದ್ದು ಬೆಚ್ಚಿದ ಗೋಪಿಯ ಕಂದನಮ್ಮ

ತಾಯಿ ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಖೋಡಿಕಣ್ಣಲಿ
ತಾಯಿ ಸಿಟ್ಟನು ತಳೆದು ಸೊಂಟಕೆ ಕೈಯಿಟ್ಟುಆದಳು
ಅರೆಕ್ಷಣ ಭೀಕರ ಕಾಳಿ ದುರು ದುರು ಕಣ್ಬಿಟ್ಟು

ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆಇಳಿಯಿತು
ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆತಪ್ಪಿದ
ದಂಡಕೆ ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲತಟ್ಟನೆ
ಅಳುವುದ ನಿಲ್ಲಿಸಿ ನಕ್ಕ ಬಾಯಗಲಿಸಿ ಬಾಲಅರಳಿದ
ಬೆಳದಿಂಗಳ ಜಾಲಅವನ
ಅಕುಟಿಲ ಬೆಣ್ಣೆಯಂತ ನಗು ಕಾಯಲಿ ಜಗದವರಸಂತತ
ನಗಿಸಲಿ ನಗದವರ

Thursday, October 25, 2012

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ
ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi
 
 
 
 
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ.

Wednesday, October 24, 2012

ಅಕೋ ಶ್ಯಾಮ ಅವಳೇ ರಾಧೆ

ಅಕೋ ಶ್ಯಾಮ ಅವಳೇ ರಾಧೆ
ಸಾಹಿತ್ಯ - Pu Ti Na
ರಾಗ ಸಂಯೋಜನೆ - C Ashwath
ಹಾಡಿರುವವರು - M S Sheela & K S Surekha

http://www.kannadaaudio.com/Songs/Bhaavageethe/BhaavaBindu/Ako.ram


ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ

ನೋಡಿ ತಣಿಯೆ ಹಾಡಿ ತಣಿಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ

Tuesday, October 23, 2012

ಪ್ರೀತಿ ಕೊಟ್ಟ ರಾಧೆಗೆ

For the rest of this week, we will listen to a few Radha - Krishna songs.

ಪ್ರೀತಿ ಕೊಟ್ಟ ರಾಧೆಗೆ
ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi


http://www.kannadaaudio.com/Songs/Bhaavageethe/LiveConcert-3-PallaviArun/Preethi.ram

ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ

ಗಂಧ ಕೊಟ್ಟ ಹೆಣ್ಣಿಗೆ
ಅಂದ ಕೊಟ್ಟ ಮಾಧವ
ಅನ್ನ ಕೊಟ್ಟ ಭಕ್ತಗೆ
ಹೊನ್ನ ಕೊಟ್ಟ ಮಾಧವ

ಹಾಲು ಕೊಟ್ಟ ವಿಧುರಗೆ
ಬಾಳು ಕೊಟ್ಟ ಮಾಧವ
ದೇಹ ಕೊಟ್ಟ ಮಣ್ಣಿಗೆ
ಜೀವ ಕೊಟ್ಟ ಮಾಧವ

Monday, October 22, 2012

ಮೈಸೂರು ದಸರ ಎಷ್ಟೊಂದು ಸುಂದರ

"ಮೈಸೂರು ದಸರ ಎಷ್ಟೊಂದು ಸುಂದರ" from the movie "ಕರುಳಿನ ಕರೆ".
ಹಾಡಿರುವವರು Dr. P B Sreenivas.
Not really a bhaavageete, but dasara always brings fond memories of the festivities and celebrations in Mysore.

http://www.kannadaaudio.com/Songs/Compilations/Legends-PB-Sreenivos-3/Mysooru-Dasara.ram



ಮೈಸೂರು ದಸರ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ
ಎಲ್ಲೆಲ್ಲು ನಗೆಯ ಪನ್ನೀರ

ಚಾಮುಂಡಿ ಮಹಿಶನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆಮನೆ ನಲಿಸುವ ಶುಭ ನವರಾತ್ರಿ

ಮಾರ್ನೋಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದಿ ವರವನು ಬೇಡಿ
ಮಕ್ಕಳು ನಾವೆಲ್ಲ ಒಂದಾಗಿ ಕೂಡಿ
ಕೊಂಡಾಡುವ ಬನ್ನಿ ಶುಭ ನವರಾತ್ರಿ

ಶತ್ರುವ ಅಳಿಸಲು ಷತ್ರವ ಹೂಡಿ
ಬಡತನ ಹರಿಸಲು ಪಂಥವ ಮಾಡಿ
ಹೆಗಲಿಗೆ ಹೆಗಲು ನಾವು ಜೊತೆ ನೀಡಿ
ಕುಣಿಯೋನ ತಾಯಿಯ ಹೆಸರನು ಹಾಡಿ